ಸುಳ್ಯ ತಾಲೂಕಿನ, ಕೊಡಿಯಾಲದಲ್ಲಿ ಮಗುವಿನೊಂದಿಗೆ ಕೆರೆಗೆ ಹಾರಿದ ತಾಯಿ. ತಾಯಿ ಮತ್ತು ಮಗುವೂ ಮೃತ್ಯು
ಮಗುವಿನೊಂದಿಗೆ ತಾಯಿಯೊಬ್ಬಳು ಕೆರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಪ್ರಕರಣವೊಂದು ಸುಳ್ಯದ ಕೊಡಿಯಾಲದ ಆರ್ವಾದಿಂದ ವರದಿಯಾಗಿದೆ. ಕೊಡಿಯಾಲದ ಹರೀಶ್ ಆರ್ವಾರ ಎಂಬವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಮೃತಪಟ್ಟ ದುರ್ದೈವಿಗಳು. ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಳ್ಳಾರೆ ಪೋಲಿಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

